Call Us :
+91 96860 00046
CBSE

Shakthi Education Trust

+91 9108043552
info@shakthi.edu.in

ಕನಕದಾಸ ಜಯಂತಿ

ಮಂಗಳೂರು: ಇಲ್ಲಿನ ಶಕ್ತಿನಗರದ ಶಕ್ತಿ ಪಿ.ಯು ಕಾಲೇಜು ಹಾಗೂ ಶಕ್ತಿ ವಸತಿ ಶಾಲೆಯಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಕುದ್ರೋಳಿ ಶ್ರೀ ನಾರಾಯಣ ಗುರು ಪದವಿ ಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಶ್ರೀ ಕೇಶವ ಬಂಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕನಕದಾಸರ ಕೀರ್ತನೆಗಳು ಮತ್ತು ಇತರ ಸಾಹಿತ್ಯ ರಚನೆಗಳು ಲೋಕದ ಡೊಂಕನ್ನು ತಿದ್ದಲು ಪೂರ್ಣ ಸಹಕಾರಿಯಾಗಿದ್ದವು. ಶತಮಾನಗಳ ಹಿಂದೆಯೇ ಕನಕದಾಸರು ಮಾನವ ತನ್ನ ಸಂಕುಚಿತ ಮನೋಭಾವಗಳನ್ನು ಕಿತ್ತೆಸೆದು ಮಾನವ ಜಾತಿ ಒಂದೇ ಎಂಬ ಖಚಿತ ನಿಲುವನ್ನು ತಳೆದು ಮಾನವರೆಲ್ಲರೂ ಒಂದೇ ಎಂಬ ಮನೋಭಾವದಿಂದ ಬದುಕಬೇಕು ಎಂದು ಕರೆಯಿತ್ತರು. ಪಾಖಂಡಿತನ ಹಾಗೂ ತೋರ್ಪಡಿಕೆಯ ಭಕ್ತಿ ಹಾಗೂ ಜನಸೇವೆಯನ್ನು ಅವರು ಖಂಡಿಸಿದರು. ಮನುಜಕುಲವನ್ನು ಸನ್ಮಾರ್ಗದತ್ತ ಕೊಂಡೊಯ್ಯುವಲ್ಲಿ ಕನಕದಾಸರ ಕೀರ್ತನೆಗಳ ಪಾತ್ರ ಹಿರಿದಾದುದು. ಮಾನವಕುಲಕ್ಕೆ ಅವರು ನೀಡಿದ ಸಂದೇಶ ಸಾರ್ವಕಾಲಿಕವಾಗಿ ಶ್ರೇಷ್ಠ ಎಂಬುದರಲ್ಲಿ ಎರಡು ಮಾತಿಲ್ಲ, ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಂಬ ಮಾತು ಅವರು ಜಗತ್ತಿಗೆ ನೀಡಿದ ಮಹಾಸಂದೇಶ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಕೆ.ಸಿ ನಾೖಕ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತಾಧಿಕಾರಿ ಶ್ರೀ ಬೈಕಾಡಿ ಜನಾರ್ದನ ಆಚಾರ್, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಶ್ರೀ ಪ್ರಖ್ಯಾತ್ ರೈ, ಪ್ರಧಾನ ಸಲಹೆಗಾರ ಶ್ರೀ ರಮೇಶ್ ಕೆ, ಎಬಿವಿಪಿ ವಿಭಾಗದ ಸಂಘಟನಾ ಕಾರ್ಯದರ್ಶಿ ಬಸವೇಶ, ಶಕ್ತಿ ವಸತಿ ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ವಿದ್ಯಾ ಕಾಮತ್ ಜಿ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀ ಪ್ರಭಾಕರ ಜಿ.ಎಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕಿ ಶ್ರೀಮತಿ ಶಶಿಕಲಾ ಎಂ.ಎನ್ ಕನಕದಾಸರ ಕಿರು ಪರಿಚಯವನ್ನು ಮಾಡಿಕೊಟ್ಟರು. ಶ್ರೀಮತಿ ಪ್ರೀತಿ ಸ್ವಾಗತಿಸಿ, ಶ್ರೀಮತಿ ರೇಖಾ ಬೈಕಾಡಿ ವಂದಿಸಿದರು. ಶ್ರೀನಿಧಿ ಅಭ್ಯಂಕರ್ ಕಾರ್ಯಕ್ರಮ ನಿರೂಪಿಸಿದರು.

About School

Residential School

Shakthi Residential School, founded in the year 2015, beginning with...

Vision & Mission

Shakthi is power or energy. The human body, mind and...

Management

Mr. Sanjith Naik  – Managing Trustee, Correspondent & Secretary Sanjith Naik, has...

Teaching Staff

  Mrs. Babitha Suraj Principal Mrs. Sushma Satish Coordinator –...